Search




Newsletter

Your email:

 

ವಿಚಾರಧಾರೆ

Ideologue : Pandit Deendayal Upadhyaya (1916-1968)

1953 ರಿಂದ 1968ರ ವರೆಗೆ ಪಂಡಿತ್ ದೀನ್ ದಯಾಳ್ ಉಪಾದ್ಯಾಯರು  ಭಾರತೀಯ ಜನತಾಸಂಘದ ಮುಖಂಡರಾಗಿದ್ದರು. ಬಿಜೆಪಿಯ ಪ್ರಾರಭದಿಂದಲೇ ಅವರು ಘನ ಪಾಂಡಿತ್ಯವುಳ್ಳ ತತ್ವಜ್ಞಾನಿ, ಅತ್ಯುತ್ತಮ ವ್ಯವಸ್ಥಾಪಕ, ಅತ್ಯುನ್ನತ ಮಟ್ಟದ ವೈಯುಕ್ತಿಕ ಸಮಗ್ರತೆ, ವಿಚಾರಧಾರೆ ಹಾಗೂ ಮಾರ್ಗದರ್ಶನದ ಮೂಲ ಹಾಗೂ ನೈತಿಕ  ಪ್ರೇರಕರಾಗಿದ್ದರು. ಅವರ “ಏಕಾತ್ಮ ಮಾನವತಾವಾದ” ಎಂಬ ಪ್ರಬಧದಲ್ಲಿ ಸಾಮ್ಯವಾದ ಮತ್ತು ಬಂಡವಾಳ ಶಾಹಿ ತತ್ವಗಳನ್ನು, ವಿಮರ್ಶಿಸಿ, ಅದಕ್ಕೆ ಬದಲಾಗಿ ರಾಜಕೀಯ ಮತ್ತು ಆಡಳಿತ ಪದ್ಧತಿಗೆ ಪ್ರಕೃತಿ ಮತ್ತು ಸೃಷ್ಠಿಯ ನಿಯಮಗಳಿಗೆ ಪೂರಕವಾದ ಮಾರ್ಗಗಳನ್ನು ಸೂಚಿಸಿದ್ದಾರೆ.

ಪಂಡಿತ್ ದೀನ್ ದಯಾಲ್ ಉಪಾದ್ಯಾಯರ ಜೀವನ ಚರಿತ್ರೆ

ಪಂಡಿತ್ ಜೀ ಯವರು ಹುಟ್ಟಿದ್ದು ಸೆಪ್ಟೆಂಬರ್ ೨೫ , ೧೯೧೬ ಸೋಮವಾರದಂದು, ನಾಗಲಚಂದ್ರಬನ್ ಗ್ರಾಮದ ಮಥುರಾ ಜಿಲ್ಲೆಯ ಬ್ರಿಜೀ ಎಂಬ ಸ್ಥಳದಲ್ಲಿ.

ಅವರ ತಂದೆ ಪ್ರಖ್ಯಾತ ಜೋಯಿಸರಾಗಿದ್ದರು. ಅವರ ಬಾಲ್ಯದಲ್ಲಿ ಜಾತಕವನ್ನು ಪರೀಕ್ಷಿಸಿದ ಜೋತಿಷಿಯೊಬ್ಬರು, ಅವರು ಉತ್ತಮ ಪಂಡಿತ, ವಿಚಾರವಂತ, ಸ್ವಾರ್ಥವಿಲ್ಲದ ಕೆಲಸಗಾರ ಮತ್ತು ರಾಜಕಾರಣಿಯಾಗುವರು, ಆದರೆ ಅವರು ಮದುವೆಯಾಗುವುದಿಲ್ಲ ಎಂದು ನುಡಿದಿದ್ದರು.

೧೯೩೪ರಲ್ಲಿ ಬಾಲ್ ಪುರದಲ್ಲಿ ಸಹೋದರನಿಗಾದ ಅನಾರೋಗ್ಯದಿಂದ ಅವರನ್ನು ಕಳೆದುಕೊಂಡರು. ಮುಂದೆ ಅವರು ಪದವಿ ಪೂರ್ವ ಶಿಕ್ಷಣಕ್ಕಾಗಿ ಸಿಕ್ಕರ್ ಗೆ ಹೋದರು.

ಸಿಕ್ಕರ್ ನ ಮಹಾರಾಜರು ಪಂಡಿತ್ ದೀನ್ ದಯಾಳ್ ಉಪಾದ್ಯಾಯರಿಗೆ ಚಿನ್ನದ ಪದಕ ಮತ್ತು ಪುಸ್ತಕಗಳಿಗಾಗಿ ರೂ.೨೫೦ ಮತ್ತು ತಿಂಗಳ ವಿದ್ಯಾರ್ಥಿ ವೇತನವಾಗಿ ರೂ.೧೦ನ್ನು ನೀಡಿದರು. ಪಂಡಿತ್ ದೀನ್ ದಯಾಳ್ ಉಪಾದ್ಯಾಯರು ಉತ್ತಮ ಅಂಕಗಳೊಂದಿಗೆ ಪದವಿ ಪೂರ್ವ ಶಿಕ್ಷಣವನ್ನು ಪಿಲಾನಿ ಯಲ್ಲಿ ಮುಗಿಸಿದರು ಮತ್ತು ಬಿಎ ಯನ್ನು ಮುಂದುವರಿಸಲು ಖಾನ್ ಪುರಕ್ಕೆ ಬಂದು ಸನಾತನಧರ್ಮ ಕಾಲೇಜಿಗೆ ಸೇರಿದರು. ಅಲ್ಲಿ ಅವರ ಗೆಳೆಯರಾದ ಶ್ರೀ ಬಲವಂತ್ ಮಹಾಶಬ್ದೇ ಯವರು ಅರ್ ಎಸ್ ಎಸ್ ಗೆ ೧೯೩೭ರಲ್ಲಿ ಸೇರಿದರು. ೧೯೩೭ರಲ್ಲಿ ಪ್ರಥಮ ಶೇಣಿಯಲ್ಲಿ ಪಂಡಿತ್ ಜೀ ಯವರು ಬಿಎ ಯನ್ನು ಮುಗಿಸಿ ಎಮ್ ಎ ಮಾಡಲು ಆಗ್ರಾಕ್ಕೆ ಹೋದರು.  ಅರ್ ಎಸ್ ಎಸ್ ನ ಚಟುವಟಿಕೆಗಳಿಗಾಗಿ ಶ್ರೀ ನಾನಾಜಿ ದೇಶ್ಮುಖ್ ಮತ್ತು ಭಾವು ಜುಗಾದೆ ಯವರ ಒತ್ತಾಯದ ಮೇರೆಗೆ ಸೇರ್ಪಡೆಯಾದರು. ಈ ಸಮಯದಲ್ಲಿ ಪಂಡಿತ್ ಜೀ ಯವರ ತಂಗಿಯಾದ ರಮಾದೇವಿ ಯವರು ಅನಾರೋಗ್ಯಕ್ಕೀಡಾದರು, ಅವರು ಚಿಕಿತ್ಸೆಗಾಗಿ ಆಗ್ರಾಕ್ಕೆ ಬಂದು ಕಾಲವಾದರು. ಇದರಿಂದ   ಪಂಡಿತ್ ಜೀ ಯವರು ತುಂಬಾ ದುಃಖಕ್ಕೆ ಒಳಗಾಗಿ ಎಮ್ ಎ ಪರೀಕ್ಷೆಯನ್ನು ತೆಗೆದುಕೊಳ್ಳಲಿಲ್ಲ.

ಮಹಾರಾಜ ಸಿಕ್ಕರಿಂದ ಅವರ ವಿದ್ಯಾರ್ಥಿ ವೇತನವನ್ನು ಬೇಗನೆ ಪಡೆದರು ಮತ್ತು ಶ್ರೀ ಬಿರ್ಲಾ ರವರು ಮುಂದುವರಿಸಲಿಲ್ಲ.

ಆ ಸಮಯದಲ್ಲಿ ಅವರ ಅತ್ತೆಯವರು ಸರಕಾರದ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಹಾಯ ಮಾಡಿದರು ಅಲ್ಲಿ ಇವರು ದೊತಿ ಮತ್ತು ಕುರ್ತಾ ,ತಲೆಯಲ್ಲಿ ಟೋಪಿ ಯೊಂದಿಗೆ , ಇತರರು ವಿದೇಶೀ ಬಟ್ಟೆಗಳಲ್ಲಿ ಇದ್ದರು. ಅವರೆಲ್ಲಾ ಇವರನ್ನು “ಪಂಡಿತ್ ಜೀ” ಎಂದು ತಮಾಷೆ ಮಡುತ್ತಿದ್ದರು. ಕೆಲವರು ಮಾತ್ರ ಗೌರವ ತೋರಿದರು. ಅದರೆ  ಪರೀಕ್ಷಾ ಪಲಿತಾಂಶ ದಲ್ಲಿ ಇವರ ಹೆಸರು ಮೊದಲಲ್ಲಿ ಬಂದಾಗ ಎಲ್ಲರೂ ಪ್ರೀತಿಸಿದರು.

ಮಾವನವರ ಒತ್ತಾಯದ ಮೇರೆಗೆ ಪ್ರಯಾಗಕ್ಕೆ ಬಿಟಿ ಗಾಗಿ ಹೋದರು . ಅಲ್ಲಿ ಅವರು  ಅರ್ ಎಸ್ ಎಸ್ ನ ಚಟುವ ಟಿಕೆಗಳನ್ನು ಮುಂದುವರೆಸಿಕೊಂಡು ಬಿಟಿ ಮುಗಿಸಿದ ನಂತರ ಅರ್ ಎಸ್ ಎಸ್ ಅವರು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿ ಕೊಂಡರು. ಅಲ್ಲಿಂದ  ೧೯೫೫ ರಲ್ಲಿಉತ್ತರ ಪ್ರದೇಶದ ಲಕ್ಷ್ಮೀಪುರ ಜಿಲ್ಲೆಗೆ ತತ್ಕಾಲಿಕ  ಸ್ಥಾಪಕರಾಗಿ ಹೋದರು.

ಅವರು ಲಕ್ನೋ ದ ಮನೆಯನ್ನು ರಾಷ್ಟ್ರ ಧರ್ಮ ಪ್ರಕಾಶವನ್ನಗಿ ಮಾಡಿದರು, ಅಲ್ಲಿ “ರಾಷ್ಟ್ರ ಧರ್ಮ” ಮಾಸ ಪತ್ರಿಕೆಯನ್ನು ಬಿಡುಗಡೆ ಮಾಡಿದರು.ಅದರಲ್ಲಿ ದೇವರ ಬಗೆಗಿನ ಪ್ರಮುಖ ವಿಚಾರಗಳನ್ನು ಮಂಡಿಸಿದರು. ಮುಂದೆ ಅವರು “ಪಾಂಚಜನ್ಯ” ವೆಂಬ ವಾರ ಪತ್ರಿಕೆ ಯನ್ನು ಬಿಡುಗಡೆ ಮಾಡಿದರು. ಕೆಲವು ಸಮಯಗಳ ಬಳಿಕ “ ಸ್ವದೇಶ್ “ ಎಂಬ ದಿನ ಪತ್ರಿಕೆ ಯನ್ನು ಬಿಡುಗಡೆ ಗೊಳಿಸಿದರು. ೧೯೫೦ರಲ್ಲಿ ಡಾ|| ಶ್ಯಾಮ ಪ್ರಸಾದ ಮುಖರ್ಜೀ, ಕೇಂದ್ರದಲ್ಲಿ ಮಂತ್ರಿಯಗಿದ್ದರು, ನೆಹರೂರವರ ಲಿಯಾಕತ್ ಒಪ್ಪಂದವನ್ನು ವಿರೋಧಿಸಿ ತಮ್ಮಸ್ಥಾನಕ್ಕೆ ರಾಜೀನಾಮೆ ನೀಡಿದರು.

ವಿರೋಧ ಪಕ್ಷಕ್ಕೆ ಸೇರಿ ಪ್ರಜಾಪ್ರಭುತ್ವದ ಶಕ್ತಿಯನ್ನು  ರಚಿಸಿ  ಅದರ ಮುಂದಾಳುತ್ವ ವಹಿಸಿದರು . ಡಾ|| ಮುಖರ್ಜೀ ಮತ್ತು ಡಾ||ಗುರೂಜೀ ಯವರ ಸಹಾಯದಿಂದ ರಾಜಕೀಯ ಕ್ಷೇತ್ರಗಳಲ್ಲಿ ಕೆಲಸ ಮಾಡಲ್ಲು ಯವಜನರ ಸಂಘವನ್ನು ರೂಪಿಸಿ ಕೊಟ್ಟರು.

ಪಂಡಿತ್ ದೀನ್ ದಯಾಲ್ ಜೀ ಯವರು ಸೆಪ್ಟೆಂಬರ ೨೧ ೧೯೫೧ ರಲ್ಲಿ ರಾಜಕೀಯ ರೂಪಾಂತರ ಗೊಂಡ ಉತ್ತರ ಪ್ರದೇಶ ಕ್ಕೆ ಒಂದು ಹೊಸ ರಾಜಕೀಯ ಸಂಸ್ಥೆಯಾದ ಬಿಜೆಪಿ ಯನ್ನು ಸೇರಿಸಿದರು. ಪಂಡಿತ್ ಜೀಯವರು ಚಲನಾಶೀಲ ವ್ಯಕ್ತಿ ಮತ್ತು ಡಾ||ಮುಖೇಶ್ ಜೀಯವರು ಒಕ್ಟೋಬರ್ ೨೧ ೧೯೫೧ರಲ್ಲಿ ಭಾರತದ ಮೊದಲ ನಿಶ್ಚಿತ ಮತದೊಂದಿಗೆ ಅಧ್ಯಕ್ಷರಾದರು. ಪಂಡಿತ್ ದೀನ್ ದಯಾಲ್ ಜೀ ಯವರ ಸಂಘಟನೆಯ ಕೌಶಲ್ಯಕ್ಕೆ ಸರಿಸಾಠಿಯಾಗಲು ಸಾದ್ಯ ವಿರಲ್ಲಿಲ್ಲ.

1968 ರಲ್ಲಿ ಈ ಅತ್ಯುನ್ನತ ನಾಯಕ ಅಧ್ಯಕ್ಷ ಪದವಿಗೇರಿದಾಗ ಜನ ಸಂಘದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ ಬಂತು.ಈ ಮಹೋನ್ನತ ಜವಾಬ್ದಾರಿಯನ್ನು ವಹಿಸಿಕೊಂಡು ಜನಸಂಘದ ಸಂದೇಶದೊಂದಿಗೆ ದಕ್ಷಿಣಕ್ಕೆ ಹೋದರು, ಅಂದು ೧೧ಫೆಬ್ರವರಿ ೧೯೬೮ ರ ಕಾಳರಾತ್ರಿ ಭಯಂಕರವಾಗಿ ಕಾಲನ ದವಡೆಗೆ ತಳ್ಳಲ್ಪಟ್ಟರು.