ಉಗ್ರರ ದಮನದ ಸರಕಾರದ ಕ್ರಮ ಅಭಿನಂದನೀಯ : ಕರ್ನಾಟಕ ಬಿಜೆಪಿ
ಮಂಗಳವಾರ, ಸೆಪ್ಟೆಂಬರ 23rd, 2008ಬೆಂಗಳೂರು , ಸೆಪ್ಟೆಂಬರ್ 23 , ಹುಬ್ಬಳ್ಳಿ , ಕರಾವಳಿ ಸೇರಿದಂತೆ ಕರ್ಣಾಟಕದ ಕೆಲ ಪ್ರದೇಶಗಳು ಉಗ್ರರ ನೆಚ್ಚಿನ ತಾಣವಾಗುವುದನ್ನು ತಡೆಯಲು ಸಜ್ಜಾದ ಸರಕಾರದ ಕ್ರಮವನ್ನು ಕರ್ನಾಟಕ ಬಿಜೆಪಿ ಸ್ವಾಗತಿಸಿದೆ.
ಉಗ್ರರನ್ನು ಮಟ್ಟಹಾಕಲು ರಾಜ್ಯ ಪೊಲೀಸ್ ಪಡೆ ಯನ್ನು ಸಕಲ ಸನ್ನದ್ಧಗೊಳಿಸುವುದರೊಂದಿಗೆ ಆ ಇಲಾಖೆಗೆ ಬೇಕಾದ ಎಲ್ಲ ಮೂಲಭೂತ ಸೌಕರ್ಯ, ಸ್ವಾತಂತ್ರ್ಯಗಳನ್ನು ಒದಗಿಸಲು ಮುಂದಾದ ಸರ್ಕಾರದ ನೀತಿಗೆ ರಾಜ್ಯ ಬಿಜೆಪಿ ಮೆಚ್ಚುಗೆ ಸೂಚಿಸಿದೆ.

