
ಬೆಳಗಾವಿ : ರಾಜ್ಯಪಾಲರು ಗೋ ಹತ್ಯಾ ಮಸೂದೆಯನ್ನು ಅಂಗೀಕರಿಸದ ಹಿನ್ನೆಲೆಯಲ್ಲಿ ಅವರ ಗಮನ ಸೆಳೆಯಲು ಬೆಳಗಾವಿ ಗ್ರಾಮೀಣ ವಿಧಾನ ಸಭಾ ಶಾಸಕ ಸಂಜಯ ಪಾಟೀಲ ನೇತೃತ್ವದಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ಸೆಪ್ಟಂಬರ್ 5 ರಿಂದ 7 ರ ವರೆಗೆ ಬೃಹತ್ ದ್ವಿ ಚಕ್ರ ವಾಹನ ಜಾಥ ನಡೆಸಲಿದ್ದಾರೆ.
ಈ ಕುರಿತು ಶಾಸಕ ಸಂಜಯ ಪಾಟೀಲ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಹಿಂದುಗಳು ಅನಾದಿ ಕಾಲದಿಂದಲೂ ದೈವಿಕ ಮನೋಭಾವದಿಂದ ಪೂಜಿಸುವ ಗೋವುಗಳ ರಕ್ಷಣೆಯಾಗಬೇಕಿದೆ. ರಾಜ್ಯ ಸರಕಾರ ಮಂಡಿಸಿದ ಗೋ ಹತ್ಯಾ ನಿಷೇದ ಕಾಯ್ದೆಯನ್ನು [...]