Part I: Part II: Part III:
ಬೆಂಗಳೂರು, ಮೇ 17: ರಾಜ್ಯಪಾಲ ಭಾರದ್ವಾಜ್ ಗೆ ಇಂದು 74ನೇ ಹುಟ್ಟು ಹಬ್ಬ. ಏಕಾಂಗಿಯಾಗಿದ್ದ ಅವರನ್ನು ದೇವೇಗೌಡ ಮತ್ತು ಸಿದ್ದರಾಮಯ್ಯ ಅವರು ಔಪಚಾರಿಕವಾಗಿ ಭೇಟಿ ಮಾಡಿ ಶುಭಾಷಯ ಕೋರಿದ್ದು ಬಿಟ್ಟರೇ ರಾಜಭವನದಲ್ಲಿ ಸಂಭ್ರವೇ ಇರಲಿಲ್ಲ. ವಾಸ್ತವವಾಗಿ, ಭಾರದ್ವಾಜ್ ಭರ್ಜರಿ ಬರ್ತ್ ಡೆ ಗಿಫ್ಟ್ ಅನ್ನು ನಿರೀಕ್ಷಿಸಿದ್ದರು. ಆದರೆ ಯಡಿಯೂರಪ್ಪ ಸರಕಾರವನ್ನು ಕಿತ್ತೊಗೆಯುವ ಅವರ ಪ್ರಯತ್ನಕ್ಕೆ ಪಾಪ ಕಾಂಗ್ರೆಸ್ ಹೈಕಮಾಂಡ್ ಈ ತನಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹುಟ್ಟುಹಬ್ಬದಂದು ಭಾರದ್ವಾಜ್ ನಿಜಕ್ಕೂ ಭಾರವಾದ ಹೃದಯವನ್ನೇ ಹೊರುವಂತಾಗಿದೆ. ರಾಜ್ಯಪಾಲರ ವರದಿಯಿಂದ [...]
‘ಅಧಿವೇಶನಕ್ಕೆ ಅಸ್ತು ಎನ್ನದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ’
ಬೆಂಗಳೂರು, ಮೇ 19: ಗುರುವಾರ ಕೇಂದ್ರ ಸಚಿವ ಸಂಪುಟ ನಡೆದಿದ್ದು, ಕರ್ನಾಟಕ ರಾಜ್ಯಪಾಲರ ವರದಿ ಬಗ್ಗೆ ಅನೌಪಚಾರಿಕವಾಗಿ ಚರ್ಚೆ ನಡೆಸಿದೆ. ‘ಸುಪ್ರೀಂ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿರುವ ಸ್ಪೀಕರ್ ಬೋಪ್ಪಯ್ಯ ಅವರನ್ನು 18 ದಿನಗಳೊಳಗಾಗಿ ಬದಲಾಯಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿ. ಇಲ್ಲವಾದಲ್ಲಿ, ಸರಕಾರ ವಜಾ ಬಗ್ಗೆ ಮುಂದಿನ ಕ್ರಮ ಜರುಗಿಸೋಣ’ ಎಂಬರ್ಥದ ಸಂದೇಶವನ್ನು ರಾಜ್ಯಪಾಲ ಭಾರದ್ವಾಜ್ ಅವರಿಗೆ ಸಭೆಯ ಬಳಿಕ ರವಾನೆಯಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸಂಪುಟ ಸಭೆಯ ಅಜೆಂಡಾದಲ್ಲಿ ವಾಸ್ತವವಾಗಿ ಕರ್ನಾಟಕದ ಬಗ್ಗೆ ಯಾವುದೇ [...]